ಜೀವರೂಪ

ಯಾವುದೀ ಒಳಗಿನ ಲೋಕ
ಹೊರಗೆ ಲಯವಾಗುತ್ತ ಒಳಗೆ
ಹುಟ್ಟುತಿಹುದು.
ಒಳಗೆ ಮೂಡಿದ ಆಕೃತಿ
ಹೊರಗೆ ಕೃತಿಯಾಗುತ್ತಿಹುದು.

ಸತ್ತ ಜೀವಗಳ ಮೇಲೆ ಚಿತ್ತವಿಟ್ಟವರಾರು
ಭೂಮಿಯಲ್ಲಿ ಎಲ್ಲರೂ ಬೆಂಕಿ ಬೆಳೆದವರು
ಅಗ್ನಿಸುತೆ ಸೀರೆಯಲಿ ಸಂಕಟವ ಬಿಚ್ಚಿಕೊಳ್ಳುತ್ತಿರುವಾಗ
ಬಾಯಿ ಕಚ್ಚಿಕೊಂಡರು ನಮ್ಮ ಪುಣ್ಯಪುರುಷರು!

ಸೀತೆಸೀರೆಯ ಗಂಟು ಬಿಚ್ಚಿಕೊಳ್ಳಲಿಲ್ಲ
ಬೆಚ್ಚಿಬಿದ್ದರು ನೀತಿವಂತರು ರಾವಣನ ಹೆಸರಿಗೆ
ಹೊರಗೆ ಏಕಲವ್ಯನ ಹೆಬ್ಬೆರಳು ಕೆಂಬೆವರು
ಮುಂದೆ ಬರೆಯಿತು ಕರ್ಣರಥವ ಕರಿನೆತ್ತರು.

ಪುರಾಣಕ್ಕೆ ಮಾಡಿದ ಕಸಿ ಇತಿಹಾಸವಾಗಿ
ಸಮಕಾಲೀನದಲ್ಲೂ ಬುದ್ಧಿ-ಬಲದ ಅಟ್ಟಹಾಸ!
ಯಾರು ರಾವಣ, ಯಾರು ರಾಮ
ಯಾರು ಕೌರವ, ಯಾರು ಧರ್ಮ, ದ್ರೋಣ?
ಯಾರದೊ ಬಿಲ್ಲು ಯಾರದೊ ಬಾಣ
ಮಾರಾಟಕ್ಕಿದೆ ಬೆವರಿನ ಪ್ರಾಣ!

ಪುರಾಣೇತಿಹಾಸದ ಪುಣ್ಯಾರ್ಚನೆಯಲ್ಲಿ
ಒಳತಿರುಳ ಸುಟ್ಟು
ಅರ್ಥಶೋಧಕ್ಕೆ ಹಾಕಿದರು ಕಣ್ಣುಕಟ್ಟು.

ಹೊರಗಿನ ಹುನ್ನಾರ ಲಯವಾಗುತ್ತ ಹೋದಂತೆ
ಒಳಗು ಬಿಚ್ಚಿಕೊಳ್ಳುತ್ತದೆ ಸಿಪ್ಪೆ ಸುಲಿದು
ಬೀಜ ಬೆಳೆಯುತ್ತದೆ ಹುಟ್ಟಿನಲ್ಲಿ ಸಾಯುತ್ತ
ಸಾವಿನಲಿ ಹುಟ್ಟುತ್ತ ಜೀವರೂಪವ ತಳೆದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎತ್ತ ಹೋದನಮ್ಮ?
Next post ಪ್ರೇಮ ವಿವಾಹ

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

cheap jordans|wholesale air max|wholesale jordans|wholesale jewelry|wholesale jerseys